ಏ ವಯಸ್ಸೇ

ನಾನೇನೋ ಹೇಳಿದೆ
ಬಹುಶ: ನೀನು ಕೇಳಿಸಿಕೊಳ್ಳಲಿಲ್ಲ ನೀ
ನನ್ನ ಹುಡುಗತನ ಕಸಿಯಬಹುದು
ಆದರೆ ನನ್ನ ಹುಡುಗಾಟವನು ಅಲ್ಲ

ಪ್ರತಿ ಮಾತಿಗೊಂದು ಉತ್ತರವಿರಲಾರದು,
ಪ್ರತಿ ಒಲವಿನ ಸಂಗತಿ ಕೆಟ್ಟದೇನೂ ಅಲ್ಲ.
ಹೀಗೆ ಕುಡಿದು, ನಶೆಯಲಿ ಓಲಾಡುವೆನು
ಆದರೆ ಪ್ರತಿ ನಶಾ ,ಶರಾಬಿನಿಂದೇನೂ ಅಲ್ಲ.

ಮೌನ ಮುಖದ ಮೇಲೆ ಗಸ್ತು ಸಾವಿರರಾರು
ನಗುಮಖದ ಕಣ್ಣಿನ ಗಾಯ ಅಳವೂ ಹೌದು
ಯಾರ ಜೊತೆ ನಮಗೆ ಆಗಾಗ ಕೋಪ ತಾಪವೋ
ಅವರ ಸಂಬಂಧವೇ ನಮ್ಮೊಂದಿಗೆ ಆಳ ಗಾಢ

ಯಾರೋ ದೇವರಲಿ ವರ ಬೇಡಿದರಂತೆ
ಸಾವು ಬರಲಿ ಎನ್ನುವ ವರವಂತೆ,
ದೇವರೆಂದ, ಸಾವು ನಿನಗೆ ಕೊಡುವೆ ಆದರೆ
ನಿನ್ನ ಜೀವ ಉಳಿಸೆಂದು ವರ ಕೇಳಿರುವರು
ಏನು ಹೇಳಲಿ ಹೇಳು ?

ಪ್ರತಿ ಮಾನವನ ಮನ ಕೆಟ್ಟದೇನೂ ಅಲ್ಲ
ಪ್ರತಿ ಮಾನವ ಸಹ ಕೆಟ್ಟವ ಹೇಗಾದಾನು,
ದೀಪ ಒಮ್ಮೊಮ್ಮೆ ಶಾಂತವಾದರೆ, ತೈಲದ ಕೊರತೆ,
ಪ್ರತಿ ಬಾರಿ ದೋಷ ಗಾಳಿಯದಂತು ಅಲ್ಲವೇ ಅಲ್ಲ !
*****
ಹಿಂದಿ ಮೂಲ : ಗುಲ್ಜಾರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೪೯
Next post ತರಂಗಾಂತರ – ಹಿನ್ನುಡಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys